Monday 25 October 2021

ಜನ್ನತ್


ಕಣ್ಣೀರು ಒರೆಸುವ ಇಬಾದತ್ ಇರುವವರೇ..

ಹಸಿವು ತಣಿಸುವುದರಲ್ಲೇ ನಿಮ್ಮ ಜನ್ನತ್ ನ ಘಮವಿದೆ!

ನೀವು ಉಣಿಸುವ ಪ್ರತೀ ಅನ್ನದ ಅಗುಳೂ...

ದೇವರೆಡೆ ಸಾಗುವ ದಾರಿಯಲ್ಲಿ ಚೆಲ್ಲಿದ ಮಲ್ಲಿಗೆ!

ನೀವು ಕುಡಿಸಿದ ಹನಿ ನೀರೂ..ಚೆಯೋನಿನ ಅತ್ತರು!

ನಿಮ್ಮ ಪ್ರತೀ ದುವಾಗಳೂ ದೇವರಿಗೆ ಕೇಳಿಸುತ್ತವೆ!

ನಿಮ್ಮ ಪ್ರತೀ ರುಕುವಾಗಳೂ ಅವನಿಗೆ ತಲುಪುತ್ತವೆ!

ಆಯಸ್ಸನ್ನು ಕೇಳಿಕೊಳ್ಳಬೇಡಿ..ಅವನಲ್ಲಿ.

ಅವಕಾಶವನ್ನು ಕೇಳಿ..ಹಸಿದ ಹೊಟ್ಟೆ ತಣಿಸುವ ಅವಕಾಶ!

ಅದು ಎಲ್ಲರಿಗೂ ದಕ್ಕುವಂಥದಲ್ಲ ನೋಡಿ!

ಪುಣ್ಯವಂತರಿಗೆ ಮಾತ್ರವೇ ಆ ಪವಿತ್ರ ಕಾರ್ಯ ಮೀಸಲು!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...