Monday 25 October 2021

ಗ್ರಾಮ ಪಂಚಾಯತ್ ಚುನಾವಣೆಯ ಬಗ್ಗೆ....


 ಪಾರ್ಲಿಮೆಂಟು-ಅಸೆಂಬ್ಲೀ ಎಲೆಕ್ಷನ್ನುಗಳಲ್ಲಿ ಮಾತ್ರವೇ ಕಾಣಬಹುದಾಗಿದ್ದ Election Strategyಗಳು,ತಂತ್ರ-ಪ್ರತಿತಂತ್ರ-ಕುತಂತ್ರಗಳು,ಜಾತಿ ಒಡೆವ ಹವಣಿಕೆಗಳು,ಧರ್ಮದ ಹೆಸರಿನಲ್ಲಿ ಬದುಕುಗಳ ನೆಮ್ಮದಿಯ ತಿಳಿನೀರ ಕದಡುವ, ದ್ವೇಷ ದಾವರಗಳು,ಹಳೇ ಕಾಲದ ಸೇಡಿನ ದಳ್ಳುರಿಗಳು, ಸೂಳೆ-ಮಿಂಡರ ಸಂಬಂಧದ ಸುರುಳಿಗಳನ್ನೂ ಓಟುಗಳನ್ನಾಗಿ ಪರಿವರ್ತಿಸಿಕೊಳ್ಳು ಹೀನ ಹವಣಿಕೆಗಳು.....My God!!

‌        ಹಳ್ಳಿಗಳು ಮುಗ್ಧತೆಯ ಮುಸುಕು ತೆಗೆದೆಸೆದು,ಕರುಳ-ಬಳ್ಳಿಯ ಸಂಬಂಧಗಳು ಬೆಸೆದಿದ್ದ ಸಹಸ್ರ ಬಂಧಗಳನ್ನು ಕಿತ್ತು ಬಿಸುಟಿ ದೂರ..ಬಹುದೂರ ಬಂದುಬಿಟ್ಟಿವೆ! ಅಲ್ಲೀಗ Professional Strategist ಗಳನ್ನೇ ಮೀರಿಸುವ ನಿಪುಣರಿದ್ದಾರೆ. ಗುಡಿಗಳಲ್ಲಿ ಭಜನೆ ಮಾಡುವವರು ಇಲ್ಲೀಗ ಎಲ್ಲಿದ್ದಾರೆ? ಸೋಬಾನೆ-ಸೊವ್ವೆಗಳ ದನಿಗಳೆಲ್ಲ ಹೋದವೆಲ್ಲಿ? ಕೋಲಾಟಗಳೆಲ್ಲಿ? ಅರೇ...ಊರಬಾಗಿಲ ಮುಂದೆ ಬುಗುರಿ,ಚಿಣ್ಣಿದಾಂಡುಗಳನ್ನು ಜಾತಿ-ಧರ್ಮದ ಲವಲೇಶದ ಸೋಂಕಿಲ್ಲದೆ ಆಡುತ್ತಿದ್ದ ಮಕ್ಕಳಾದರೂ ಎಲ್ಲಿ?

ಧರ್ಮಕ್ಕೂ ಮೀರಿ 'ಮಾವ,ಅಳಿಯ' ಎಂದು ಬಾಯಿತುಂಬಾ ಕರೆದು ಅಕ್ಕರೆ ತೋರುತ್ತಿದ್ದ ಮುಸ್ಲಿಂ ಸಮುದಾಯದ ಸಜ್ಜನಿಕೆಯ ಆ ಜೀವಗಳೆಲ್ಲ ಹೋದವೆಲ್ಲಿ? 'ಗೌಡರೇ,ಗೊಂಚಿಗಾರರೇ'ಎಂದು ಕರೆದರೂ ಮನೆಮಕ್ಕಳಂತೆ,ಜಾತಿ ಮೀರಿದ ಬಂಧ ಕಟ್ಟಿದ್ದ ಆ ತಳಜಾತಿ ವರ್ಗದ ಪುಣ್ಯ ಜೀವಗಳೆಲ್ಲ ಹೋದವೆಲ್ಲಿ?

ಹಳ್ಳಿಗಳೆಲ್ಲ ಸ್ಮಶಾನಗಳಾಗಿವೆ ಕಣ್ರೀ...ಅಲ್ಲೀಗ ಮನುಷ್ಯರಿಲ್ಲ!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...