Monday 25 October 2021

ಬರೆದು ಬಿಡು.


ನೋಡಿಲ್ಲಿ...

ನೀನು ಮಾತುಗಳ ಅರಸಿಯೇ ಇರಬಹುದು.

ನಿನಗೆ ಪದಗಳ ಭೋಪರಾಕ್ ಸಿಗುತ್ತಿರಬಹುದು.

ಆದರೆ ನಾನು..

ಮೌನದ ಊರಿನ ಸಾಮಾನ್ಯ ಪ್ರಜೆ.

ಇಲ್ಲಿಯ ಗಾಳಿಯ ಸದ್ದಿಗೂ ಸರಹದ್ದಿದೆ.

ಹೂ ಅರಳುವ ಶಬ್ಧಕ್ಕೂ ನಿಷಿದ್ಧವಿದೆ.

ಮಾತುಗಳನ್ನೆಲ್ಲಾ ಕಂಡಲ್ಲಿ ಕೊಲ್ಲಲಾಗುತ್ತಿದೆ.

ಇಷ್ಟಕ್ಕೂ ನನಗೆ ಏನಾದರೂ ಹೇಳುವುದಿದ್ದರೆ,

ಸೂರ‌್ಯೋದಯದ ಆಗಸದ ಮೇಲೆ ಬರೆದುಬಿಡು.

ಕಾಲದ ಜೊತೆ ಕೂತು ನಿರಾಳವಾಗಿ ಓದಿಕೊಳ್ಳುತ್ತೇನೆ!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...