Monday 25 October 2021

ಸುಮ್ಮನಿರು...

 OK ,ನೀನು ಸುಮ್ಮನಿರು..

ನಾನೂ ಸುಮ್ಮನಿರುತ್ತೇನೆ.

ಯಾವ ಕವಿತೆಯನ್ನೂ ಬರೆಯುವುದಿಲ್ಲ.

ನೀನೂ ಅಷ್ಟೇ..ಬರೆಯಕೂಡದು!

ಮೌನವೂ ಮೌನವಾಗಿ


ಬದುಕಿನೊಂದಿಗೆ ಮಾತಾಡಲಿ!

ನೆನಪುಗಳೆಲ್ಲವೂ ಕನಸುಗಳೊಂದಿಗೆ

ಸಾಕಾಗುವ ತನಕ ಹೊಡೆದಾಡಿಕೊಳ್ಳಲಿ!

ನನ್ನ ಅಕ್ಷರಗಳೆಲ್ಲವನ್ನೂ ಅಲ್ಲಿಯವರೆಗೆ

ಚುಕ್ಕು ತಟ್ಟಿ ಮಲಗಿಸುತ್ತೇನೆ.

ಏನಾದರೂ ಹೇಳಲೇಬೇಕೆಂದಿದ್ದರೆ,

ಆ ಹುಣಸೇಮರದ ಕುಂಟಗುಬ್ಬಿಗೆ ಹೇಳಿರು!

ಹಾಗೆನೇ..ರಾತ್ರಿಯ ಮುಗಿಲನೊಮ್ಮೆ ನೋಡಿಕೋ..

ನಾನೂ ಕೂಡ,ತಂಗಾಳಿಯನೊಮ್ಮೆ ಮಾತಾಡಿಸುವೆ!




No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...