Monday 25 October 2021

ಸಾಂಗತ್ಯ

 


ನನ್ನ ಬದುಕೇ ಅಸಂಗತ..
ಆದರೂ ಬದುಕಿದ್ದೇನೆ..ಬದುಕುತ್ತೇನೆ.
ಅಸಂಗತದ ಕತ್ತಲಲ್ಲಿಯೇ
ನನ್ನ ನಾಳೆಗಳನ್ನು ಗಳಿಸಿಕೊಳ್ಳುವೆನೆಂಬ
ಹುಚ್ಚು ಹಂಬಲವಿತ್ತು ನನ್ನಲ್ಲಿ.
ಕತ್ತಲಿನಲ್ಲಿ ಮಾತುಗಳು ಸಾಯುತ್ತವಂತೆ..
ಬದುಕಲು ಮಾತುಗಳಾದರೂ ಏಕೆ ಬೇಕು?
ಕತ್ತಲಿನಲ್ಲೇ ಒಂಟಿತನವು ವಿಜೃಂಭಿಸುವುದಂತೆ..
ನನ್ನ ಸುತ್ತಲೂ ಸಾವಿರ ಸೂಫಿಗಳು ಕೂತಿದ್ದಾರೆ!
ಅವರಿಗೂ ಮಾತಿಲ್ಲ - ನನ್ನ ರಾತ್ರಿಗೂ ನಿದ್ದೆಯಿಲ್ಲ!
ಮೌನದಷ್ಟು ವಾಚಾಳಿ ಬೇರೆ ಯಾವುದಿದ್ದೀತು!
ಹುಣಸೇಮರದ ಆ ಕುಂಟಗುಬ್ಬಿ ನಗಬಹುದೇನೋ!
ಆಯಸ್ಸು ಕಳೆಯಲಿಕ್ಕೆ ಅಳು-ನಗುಗಳ ಹರಕತ್ತಿಲ್ಲ.
ಒಂದಷ್ಟು ಸತ್ತ ಕನಸುಗಳ ಸಾಂಗತ್ಯವಿದ್ದರೆ ಸಾಕು.

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...